NEW

2025-26ನೇ ಸಾಲಿನ ಸ್ನಾತಕೋತ್ತರ(PG) ಪದವಿ ಪರೀಕ್ಷೆಗಳ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಗಳ ಪರೀಕ್ಷಾ ಕೇಂದ್ರ ಹೊಂದಿರುವ ಕಾಲೇಜುಗಳ ಸ್ನಾತಕೋತ್ತರ ಪರೀಕ್ಷೆಗಳಿಗೆ ಉತ್ತರ ಪತ್ರಿಕೆಯನ್ನು ವಿತರಿಸುವ ಕುರಿತು. UG II, IV and VI Sem revised External order 2026 PG II & IV Semester Examination Centre Notification for the Academic year 2025-26. ಸ್ನಾತಕೋತ್ತರ(PG) ದ್ವಿತೀಯ ಸೆಮಿಸ್ಟರ್ ನ (Regular/Repeaters) (M.A/M.Com/M.Sc/M.LiSc/M.S.W/M.J.M.C) ಪದವಿ ಪರೀಕ್ಷಾ ವೇಳಾಪಟ್ಟಿ ಜೂನ್-2026. ಸ್ನಾತಕೋತ್ತರ(PG) ನಾಲ್ಕನೇ ಸೆಮಿಸ್ಟರ್ ನ (Regular/Repeaters) (M.A/M.Com/M.Sc/M.LiSc/M.S.W/M.J.M.C) ಪದವಿ ಪರೀಕ್ಷಾ ವೇಳಾಪಟ್ಟಿ ಜೂನ್-2026. 2026-27ನೇ ಸಾಲಿನ ಸ್ನಾತಕ ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡುವ ಕುರಿತು. 2026-27ನೇ ಸಾಲಿನ ಸ್ನಾತಕ(UG) ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡಿರುವ ಕುರಿತು.

Office of Public Liaison

View by type

View by releasing authority

ಸ್ನಾತಕೋತ್ತರ ಕೋರ್ಸಗಳ ಫಲಿತಾಂಶ ಪ್ರಕಟ

೨೦೨೨-೨೩ ನೇ ಸಾಲಿನ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ನ ಎಂ.ಎ (ಕನ್ನಡ) ಹಾಗು ಎಮ್. ಎಸ್ಸಿ ( ವಿದ್ಯುದ್ಮಾನ ಮತ್ತು ಉಪಕರಣಾತ್ಮಕ ತಂತ್ರಜ್ಞಾನ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ವಿಷಯಗಳ ಫಲಿತಾಂಶಗಳನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯ ಮಾಪನ) ಇವರು ಪ್ರಕಟಿಸಿದರು

ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ ಆರಂಭ

೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ UUCMS ಮೂಲಕ ಆರಂಭಗೊಂಡಿದ್ದು ಈ ಬಾರಿ ಪ್ರವೇಶ ಪರೀಕ್ಷಾ ಮೂಲಕ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿಯನ್ನು ನೀಡುವುದಾಗಿ ಪ್ರೊ. ವಿಶ್ವನಾಥ್ ಎಂ. ಕುಲಸಚಿವರು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ತಿಳಿಸಿದ್ದಾರೆ.

ಕಬಡ್ಡಿ ಮತ್ತು ವಾಲಿಬಾಲ್ ತಂಡದ ಆಯ್ಕೆಯ ಪ್ರಕ್ರಿಯೆಗೆ ಚಾಲನೆ

ರಾಯಚೂರು ವಿಶ್ವವಿದ್ಯಾಲಯ ಕಬಡ್ಡಿ ಮತ್ತು ವಾಲಿಬಾಲ್ ತಂಡದ ಆಯ್ಕೆಯ ಪ್ರಕ್ರಿಯೆಗೆ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ), ಇವರು ಚಾಲನೆ ನೀಡಿದರು.

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಮಹರ್ಷಿ ಮಾಲ್ಮೀಕಿ ಜಯಂತಿ ಆಚರಣೆಯಾ ಕಾರ್ಯಕ್ರಮದಲ್ಲಿ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು ಮೌಲ್ಯಮಾಪನ, ಪ್ರೊ. ಪಿ. ಭಾಸ್ಕರ್, ನೋಡಲ್ ಅಧಿಕಾರಿಗಳು, ಡಾ. ಜಿ.ಎಸ್ ಬಿರಾದಾರ್, ಉಪ ಕುಲಸಚಿವರು, ಹಾಗು ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಎನ್.ಎಸ್.ಎಸ್ ಯುವಜನೋತ್ಸವ-2023

ರಾಷ್ಟ್ರೀಯ ಸೇವಾ ಯೋಜನೆ ಕೋಶ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರಕಾರ ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು ಮತ್ತು ರಾಯಚೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರಾಜ್ಯಮಟ್ಟದ ಎನ್.ಎಸ್.ಎಸ್ ಯೋಜನೋತ್ಸವ-2023 ಕಾರ್ಯಕ್ರಮವನ್ನು ದಿನಾಂಕ 03.10.2023 ರಿಂದ 07.10.2023 ರವರೆಗೆ ಪ್ರೇಕ್ಷಾಗೃಹ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರುನಲ್ಲಿ ಆಯೋಜಿಸಲಾಗಿದೆ.

ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 15.09.2023 ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಿ.ಎಡ್ ಪ್ರಥಮ ಹಾಗು ತೃತೀಯ ಸೆಮಿಸ್ಟರ್ ನ ಫಲಿತಾಂಶಗಳು ಪ್ರಕಟ

ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ಬಿ.ಎಡ್ ಪ್ರಥಮ ಹಾಗು ತೃತೀಯ ಸೆಮಿಸ್ಟರ್ ನ ಫಲಿತಾಂಶಗಳನ್ನು ಪ್ರಕಟಿಸಿದರು ಮತ್ತು ಬಿ.ಎಸ್ಸಿ, ಬಿಸಿಎ, ಬಿಬಿಎ, ಬಿಕಾಂ ದ್ವಿತೀಯ ಸೆಮಿಸ್ಟರ್ ನ ಫಲಿತಾಂಶಗಳನ್ನು ಪ್ರಕಟಿಸಲು ಸಹಾಯ ಮಾಡಿದ UUCMS ನ HEAD ಹಾಗು ತಾಂತ್ರಿಕ ಸಿಬ್ಬಂದಿ ಬೆಂಗಳೂರು ಇವರುಗಳಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.

ವಿಶೇಷ ಉಪನ್ಯಾಸ ಕಾರ್ಯಕ್ರಮ.

“ವಿದ್ವತ್ಪೂರ್ಣ ಬರವಣಿಗೆ ಮತ್ತು ಪ್ರಕಾಶನ : ಕಾರ್ಯ ತಂತ್ರಗಳ” ಕುರಿತು ಒಂದು ದಿನದ ವಿಶೇಷ ಉಪನ್ಯಾಸವನ್ನು ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಾನ್ಯ ಕುಲಪತಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.

ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ ಅಂಗವಾಗಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ದಿನಾಂಕ ೦೫.೦೯.೨೦೨೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು