ಯುವ ಕ್ರೀಡಾಪಟುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ವಾಲ್ಮೀಕಿ ವಿವಿ ಸದಾ ಸಿದ್ಧ – ಪ್ರೊ.ಶಿವಾನಂದ ಕೆಳಗಿನಮನಿ



ದಿ. ೧೭ ಜನವರಿ ೨೦೨೬ : ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ ೨೦೨೫-೨೬ ನೇ ಪ್ರಸಕ್ತ ಸಾಲಿನ ೮೫ ನೇ ಅಖಿಲ ಭಾರತ ಅಂತರ್ ವಿವಿಗಳ ಅಥ್ಲೆಟಿಕ್ ಕ್ರೀಡಾಕೂಟ ಜನೆವರಿ ೧೨ ರಿಂದ ೧೬ ರವರೆಗೆ ನಡೆದ ರಾಷ್ಟçಮಟ್ಟದ ಈ ಕ್ರೀಡಾಕೂಟದಲ್ಲಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಡುವ ನಾನಾ ಕಾಲೇಜಿನ ವಿದ್ಯಾರ್ಥಿಗಳಾದ ಸೋನಿ ದೇವಿ ೫ ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕ, ಪ್ರಿನ್ಸ್ರಾಜ್ ಯಾದವ್ ೧೦ ಸಾವಿರ ಸಾವಿರ ಮೀಟರ್ ಓಟದಲ್ಲಿ ಕಂಚಿನ ಪದಕ ಮತ್ತು ೫ ಸಾವಿರ ಮೀಟರ್ ಓಟದಲ್ಲಿ ಬೆಳ್ಳಿ ಪದಕ, ಖುಷ್ಬೂ ಪಾಟೀಲ್ ಹಾಫ್ ಮ್ಯಾರಥಾನ್ ಓಟದಲ್ಲಿ ಕಂಚಿನ ಪದಕ ಮತ್ತು ೪ಘಿ೧೦೦ ಮೀಟರ್ ರಿಲೇ ಓಟದಲ್ಲಿ ಗೌರಮ್.ಎಂ., ನವೀನ್ .ವಿ., ಮಾರ್ಕ್ ಆ್ಯಂಥೋನಿ ಡಿಕೋಸ್ಟ್, ಶರಣದೀಪ್.ಕೆ.ಪಿ. ಬೆಳ್ಳಿ ಪದಕ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯಶಸ್ಸನ್ನು ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ, ಕುಲಸಚಿವರು ಡಾ.ಎ.ಚನ್ನಪ್ಪ ಕೆ.ಎ.ಎಸ್, ಕುಲಸಚಿವರು(ಮೌಲ್ಯಮಾಪನ)ಡಾ.ಜ್ಯೋತಿ ಧಮ್ಮ ಪ್ರಕಾಶ್, ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ಲತಾ.ಎಂ.ಎಸ್. ಅವರು ವಿಜೇತರಾದ ಕ್ರೀಡಾಪಟುಗಳನ್ನು ಹಾರೈಸುವ ಮೂಲಕ ಸಂಪೂರ್ಣವಾಗಿ ಸ್ವಾಗತಿಸುತ್ತಾ ಅಭಿನಂದಿಸಿದ್ದಾರೆ.