NEW

2024-25 ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಸ್ನಾತಕ(UG) BA/BSC/BCOM/BBA/BCA ಕೋರ್ಸಗಳಲ್ಲಿ ಮೊದಲ ಹತ್ತು ಶ್ರೇಣಿಗಳಲ್ಲಿ(RANK) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿರುವ ಕುರಿತು. 2026-27 ನೇ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ(MA/MSC/MCOM/MSW/MLISC/MJMC) ಪದವಿಗಳ ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸುವ ಕುರಿತು. 2026-27ನೇ ಸಾಲಿನ ಸ್ನಾತಕ(UG) ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡಿರುವ ಕುರಿತು. 2021-22 ರಿಂದ 2025-26 ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪದವಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರವೇಶಾತಿ ಶುಲ್ಕವನ್ನು ಮಹಾವಿದ್ಯಾಲಗಳು ಬಾಕಿ ಉಳಿಸಿಕೊಂಡಿರುವ ಕುರಿತು. 2026-27 ನೇ ಸಾಲಿನ ದ್ವಿತೀಯ ವರ್ಷದ ಸ್ನಾತಕೋತ್ತರ (PG) (MA/MSC/MCOM/MSW/MLISC/MJMC) ಪದವಿಗಳ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು. 2026-27 ನೇ ಸಾಲಿನ ಸ್ನಾತಕ ಪದವಿಯ ತೃತೀಯ ಹಾಗೂ ಐದನೇ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡಿರುವ ಕುರಿತು. 2022-23 ನೇ ಸಾಲಿನ ಸ್ನಾತಕ(UG) ಬಿ.ಎ(B.A) ಒಂದ ರಿಂದ ನಾಲ್ಕನೇ ಸೆಮಿಸ್ಟರ್ ಗಳ ಅಂಕಪಟ್ಟಿಗಳನ್ನು ವಿತರಿಸುವ ಕುರಿತು.

ಶಿವಯೋಗಿ ಸಿದ್ಧರಾಮ ಜಯಂತಿ : ಶಿವಯೋಗಿ ಸಿದ್ಧರಾಮರ ಕರ್ತವ್ಯ ನಿಷ್ಠೆ ಮತ್ತು ವೈಚಾರಿಕತೆ ಸ್ಪೂರ್ತಿದಾಯಕ – ಡಾ.ಎ.ಚನ್ನಪ್ಪ

ದಿ. ೧೪ ಜನವರಿ ೨೦೨೬ : ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿಂದು ಶಿವಯೋಗಿ ಸಿದ್ಧರಾಮ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸೊನ್ನಲಿಗೆ ಶಿವಯೋಗಿ ಸಿದ್ಧರಾಮ ಇವರು ೧೨ ನೇಯ ಶತಮಾನದ ಶರಣರಲ್ಲಿ ಒಬ್ಬರಾದ ಇವರು ಶ್ರೇಷ್ಠ ವಚನಕಾರರು ಇವರ ಅಂಕಿತನಾಮ ಕಪಿಲಸಿದ್ದ ಮಲ್ಲಿಕಾರ್ಜುನ. ಶಿವಯೋಗಿ ಸಿದ್ಧರಾಮ ಅವರ ಕರ್ತವ್ಯ ನಿಷ್ಠೆ ಮತ್ತು ವೈಚಾರಿಕತೆ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗುವುದು ಎಂದು ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಎ.ಚನ್ನಪ್ಪ ಕೆ.ಎ.ಎಸ್. ಅವರು ಹೇಳಿದರು. ಉಪಕುಲಸವ ಡಾ.ಕೆ.ವೆಂಕಟೇಶ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಸುಯಮೀಂದ್ರ ಕುಲಕರ್ಣಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಜಿ.ಎಸ್.ಬಿರಾದಾರ, ಡೀನರಾದ ಪ್ರೊ.ಪಾರ್ವತಿ.ಸಿ.ಎಸ್, ಡಾ.ಲತಾ.ಎಂ.ಎಸ್., ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.