NEW

2024-25 ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಸ್ನಾತಕ(UG) BA/BSC/BCOM/BBA/BCA ಕೋರ್ಸಗಳಲ್ಲಿ ಮೊದಲ ಹತ್ತು ಶ್ರೇಣಿಗಳಲ್ಲಿ(RANK) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿರುವ ಕುರಿತು. 2026-27 ನೇ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ(MA/MSC/MCOM/MSW/MLISC/MJMC) ಪದವಿಗಳ ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸುವ ಕುರಿತು. 2026-27ನೇ ಸಾಲಿನ ಸ್ನಾತಕ(UG) ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡಿರುವ ಕುರಿತು. 2021-22 ರಿಂದ 2025-26 ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪದವಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರವೇಶಾತಿ ಶುಲ್ಕವನ್ನು ಮಹಾವಿದ್ಯಾಲಗಳು ಬಾಕಿ ಉಳಿಸಿಕೊಂಡಿರುವ ಕುರಿತು. 2026-27 ನೇ ಸಾಲಿನ ದ್ವಿತೀಯ ವರ್ಷದ ಸ್ನಾತಕೋತ್ತರ (PG) (MA/MSC/MCOM/MSW/MLISC/MJMC) ಪದವಿಗಳ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು. 2026-27 ನೇ ಸಾಲಿನ ಸ್ನಾತಕ ಪದವಿಯ ತೃತೀಯ ಹಾಗೂ ಐದನೇ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡಿರುವ ಕುರಿತು. 2022-23 ನೇ ಸಾಲಿನ ಸ್ನಾತಕ(UG) ಬಿ.ಎ(B.A) ಒಂದ ರಿಂದ ನಾಲ್ಕನೇ ಸೆಮಿಸ್ಟರ್ ಗಳ ಅಂಕಪಟ್ಟಿಗಳನ್ನು ವಿತರಿಸುವ ಕುರಿತು.

ಶಿಕ್ಷಕರ ದಿನಾಚರಣೆ ಸಮಾರಂಭ.

ದಿನಾಂಕ: ೧೬.೦೯.೨೦೨೫ ರಂದು ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶ್ರೇಷ್ಠ ಶಿಕ್ಷಣ ತಜ್ಞರಾದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಉದ್ಘಾಟಿಸಿ ಮಾತನಾಡಿದರು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಜಿ.ಪ್ರಶಾಂತ್ ನಾಯಕ್ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಯಚೂರು ವಿಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಮನೀಯ ಸಾಧನೆಗೈದ ನಿವೃತ್ತ ಶಿಕ್ಷಕರಾದ ಲಿಂಗಾರೆಡ್ಡಿ ಶೇರಿ, ಆಂಜನೇಯ ಜಾಲಿಬೆಂಚಿ, ಸೈಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ, ಡಯಟ್ ನ ನಿವೃತ್ತ ಉಪ ನಿರ್ದೇಶಕರಾದ ಆರ್.ಇಂದಿರಾ ಇವರುಗಳಿಗೆ ವಿವಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಯ ಕುಲಸಚಿವರು(ಮೌಲ್ಯಮಾಪನ) ಪ್ರೊ.ಜ್ಯೋತಿ ದಮ್ಮ ಪ್ರಕಾಶ್, ಹಣಕಾಸು ಅಧಿಕಾರಿ ಗಾಯತ್ರಿ ಕೆ.ಎಸ್.ಎ.ಎಸ್., ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ. ಸುಯಮಿಂದ್ರ ಕುಲಕರ್ಣಿ,ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಡಾ.ಲತಾ ಎಂ.ಎಸ್., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.