NEW

2025-26ನೇ ಸಾಲಿನ ಸ್ನಾತಕೋತ್ತರ(PG) ಪದವಿ ಪರೀಕ್ಷೆಗಳ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಗಳ ಪರೀಕ್ಷಾ ಕೇಂದ್ರ ಹೊಂದಿರುವ ಕಾಲೇಜುಗಳ ಸ್ನಾತಕೋತ್ತರ ಪರೀಕ್ಷೆಗಳಿಗೆ ಉತ್ತರ ಪತ್ರಿಕೆಯನ್ನು ವಿತರಿಸುವ ಕುರಿತು. UG II, IV and VI Sem revised External order 2026 PG II & IV Semester Examination Centre Notification for the Academic year 2025-26. ಸ್ನಾತಕೋತ್ತರ(PG) ದ್ವಿತೀಯ ಸೆಮಿಸ್ಟರ್ ನ (Regular/Repeaters) (M.A/M.Com/M.Sc/M.LiSc/M.S.W/M.J.M.C) ಪದವಿ ಪರೀಕ್ಷಾ ವೇಳಾಪಟ್ಟಿ ಜೂನ್-2026. ಸ್ನಾತಕೋತ್ತರ(PG) ನಾಲ್ಕನೇ ಸೆಮಿಸ್ಟರ್ ನ (Regular/Repeaters) (M.A/M.Com/M.Sc/M.LiSc/M.S.W/M.J.M.C) ಪದವಿ ಪರೀಕ್ಷಾ ವೇಳಾಪಟ್ಟಿ ಜೂನ್-2026. 2026-27ನೇ ಸಾಲಿನ ಸ್ನಾತಕ ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡುವ ಕುರಿತು. 2026-27ನೇ ಸಾಲಿನ ಸ್ನಾತಕ(UG) ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡಿರುವ ಕುರಿತು.

ಶಿಕ್ಷಕರ ದಿನಾಚರಣೆ ಸಮಾರಂಭ.

ದಿನಾಂಕ: ೧೬.೦೯.೨೦೨೫ ರಂದು ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶ್ರೇಷ್ಠ ಶಿಕ್ಷಣ ತಜ್ಞರಾದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಉದ್ಘಾಟಿಸಿ ಮಾತನಾಡಿದರು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಜಿ.ಪ್ರಶಾಂತ್ ನಾಯಕ್ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರಾಯಚೂರು ವಿಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಮನೀಯ ಸಾಧನೆಗೈದ ನಿವೃತ್ತ ಶಿಕ್ಷಕರಾದ ಲಿಂಗಾರೆಡ್ಡಿ ಶೇರಿ, ಆಂಜನೇಯ ಜಾಲಿಬೆಂಚಿ, ಸೈಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ, ಡಯಟ್ ನ ನಿವೃತ್ತ ಉಪ ನಿರ್ದೇಶಕರಾದ ಆರ್.ಇಂದಿರಾ ಇವರುಗಳಿಗೆ ವಿವಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಯ ಕುಲಸಚಿವರು(ಮೌಲ್ಯಮಾಪನ) ಪ್ರೊ.ಜ್ಯೋತಿ ದಮ್ಮ ಪ್ರಕಾಶ್, ಹಣಕಾಸು ಅಧಿಕಾರಿ ಗಾಯತ್ರಿ ಕೆ.ಎಸ್.ಎ.ಎಸ್., ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ. ಸುಯಮಿಂದ್ರ ಕುಲಕರ್ಣಿ,ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಡಾ.ಲತಾ ಎಂ.ಎಸ್., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.