
ದಿ. ೧೯ ಜನವರಿ ೨೦೨೬ : ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, ಈ ಕಲುಷಿತ ಸಮಾಜದಲ್ಲಿರುವ ಜಾತಿಯತೆ, ಮೂಢನಂಬಿಕೆ, ಮೌಢ್ಯತೆ, ಕಂದಾಚಾರಗಳು, ಮಹಿಳೆಯರ ಶೋಷಣೆ, ಅಸೃಷ್ಯತೆ ಬಗ್ಗೆ ವೈದಿಕ ಕರ್ಮಠದ ಆಚರಣೆಗಳನ್ನು ದಿಕ್ಕರಿಸಿ, ಅವರಿಗೆ ವಾಚಾಮಗೋಚರವಾಗಿ ಬೈಯುತ್ತಾರೆ ಈ ಎಲ್ಲಾ ಅಪರಾಧಗಳ ಆಚರಣೆ ವಿಚಾರಗಳ ಬಗ್ಗೆ ಒಂದು ದೊಡ್ಡ ಭಂಡಾಯ ಧರ್ಮದ ಹಾಗೆ ವೇಮನು ಕಾಣುತ್ತಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕುಲಸಚಿವರು ಡಾ.ಕೆ.ವೆಂಕಟೇಶ, ಕಾಲೇಜು ಅಭಿವೃದ್ಧಿ ಮಂಡಳಿ ನಿದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಎನ್ಎಸ್ಎಸ್ ಸಂಯೋಜಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.