NEW

2025-26ನೇ ಸಾಲಿನ ಸ್ನಾತಕ(UG) ಆರನೇ(NEP) ಸೆಮಿಸ್ಟರ್ ನ (BA/BCOM) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು. 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಕೋರ್ಸಗಳ ಐದನೇ ಸೆಮಿಸ್ಟರ್ ಗೆ ಪರಿಷ್ಕೃತ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ ಕುರಿತು. 2026-27 ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ(MA/MSC/MCOM/MSW/MLISC/MJMC) ಪದವಿಗಳ ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು. 2025-26 ನೇ ಸಾಲಿನ ಸ್ನಾತಕ(UG) (BA/BSC/BCOM/BBA/BCA/BSW) ಆರನೇ ಸೆಮಿಸ್ಟರ್ NEP ಡಿಜಿಟಲ್ ಮೌಲ್ಯಮಾಪನ ಸಂಭಾವನೆಯ ಬಿಲ್ಲುಗಳನ್ನು ಸಲ್ಲಿಸುವ ಕುರಿತು. M.S.W II & IV Semester Project Viva-Voce Examination Time-Table 2026 2025-26 ನೇ ಸಾಲಿನ ಸ್ನಾತಕ(UG) ಆರನೇ(NEP) ಸೆಮಿಸ್ಟರ್ ನ (BSC/BBA/BCA) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕುರಿತು. 2025-26 ನೇ ಸಾಲಿನ ಸ್ನಾತಕ(UG) ಪ್ರಥಮ(NEP) ಸೆಮಿಸ್ಟರ್ ನ (BA/BSC/BCOM/BBA/BCA) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕುರಿತು.

ವಾಲ್ಮೀಕಿ ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಮೀಡಿಯಾ ಸರ್ಕಲ್ ಉದ್ಘಾಟನೆ ಹಾಗೂ ಪ್ರೊ.ಶಿವಾನಂದ ಕೆಳಗಿನಮನಿ ಅವರಿಂದ ವಿಶೇಷ ಉಪನ್ಯಾಸ

ಸುಸ್ಥಿರ ಸಮಾಜ ನಿರ್ಮಾಣ ಪತ್ರಕರ್ತರ ಹೊಣೆ – ಬಸವರಾಜಸ್ವಾಮಿ

ದಿನಾಂಕ: ೧೦.೧೨.೨೦೨೫ ರಂದು ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಿಂದ ಮೀಡಿಯಾ ಸರ್ಕಲ್ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸುದ್ದಿಮೂಲ ದಿನಪತ್ರಿಕೆಯ ಸಂಪಾದಕರಾದ ಬಸವರಾಜಸ್ವಾಮಿ ಅವರು ಉದ್ಘಾಟಿಸಿದರು ಮತ್ತು ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವಾಲ್ಮೀಕಿ ವಿವಿಯ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಅಧ್ಯಕ್ಷತೆ ವಹಿಸಿ ಸಾಹಿತ್ಯ ಹಾಗೂ ಮಾಧ್ಯಮ ವಿಷಯ ಕುರಿತು ಹಾಗೂ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ ಪತ್ರಿಕೋದ್ಯಮ ಮತ್ತು ಅಂಬೇಡ್ಕರ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಡಾ.ಎ.ಚನ್ನಪ್ಪ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಪ್ರೊ.ಪಿ.ಭಾಸ್ಕರ್, ಡಾ.ಲತಾ.ಎಂ.ಎಸ್., ಡಾ.ಜಿ.ಎಸ್.ಬಿರಾದಾರ್ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ.ಪ್ರಭಾ ಬಸವರಾಜ ಸ್ವಾಮಿ, ಡಾ.ಗೀತಮ್ಮ, ಡಾ.ತಿಪ್ಪಣ್ಣ ಗೊರವರ ಉಪಸ್ಥಿತರಿದ್ದರು.