ಆದಿಕವಿ ಶ್ರೀ ಮಹರ್ಷಿ ವಿವಿಯಲ್ಲಿ ವೀರವನತೆ ಒನಕೆ ಓಬವ್ವ ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆ.

ದಿನಾಂಕ ೧೧.೧೧.೨೦೨೫ ರಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರ ಅಧ್ಯಕ್ಷತೆಯಲ್ಲಿ ವೀರವನತೆ ಒನಕೆ ಓಬವ್ವ ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು. ಗೌರವ ಉಪಸ್ಥಿತರಾಗಿ ಕುಲಸಚಿವರು ಡಾ.ಎ.ಚನ್ನಪ್ಪ ಕೆ.ಎ.ಎಸ್., ಕುಲಸಚಿವರು ಮೌಲ್ಯಮಾಪನ ಪ್ರೊ. ಜ್ಯೋತಿ ದಮ್ಮ ಪ್ರಕಾಶ್ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ. ಸುಯಮಿಂದ್ರ ಕುಲಕರ್ಣಿ, ವಿವಿಧ ನಿಕಾಯಗಳ ಡೀನರುಗಳಾದ ಪ್ರೊ.ಪಾರ್ವತಿ ಸಿ.ಎಸ., ಪ್ರೊ.ಪಿ.ಭಾಸ್ಕರ್, ಡಾ. ಲತಾ ಎಂ.ಎಸ್., ಉಪಕುಲಸಚಿವರು ಡಾ.ಕೆ.ವೆಂಕಟೇಶ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಜಿ.ಎಸ್.ಬಿರಾದಾರ ಭಾಗವಹಿಸಿದರು.