NEW

೨೦೨೫-೨೬ ನೇ ಸಾಲಿನ ಸ್ನಾತಕ (UG) ದ್ವಿತೀಯ, ನಾಲ್ಕನೇಯ ಮತ್ತು ಆರನೇಯ ಸೆಮಿಸ್ಟರ್ ನ ರೆಗ್ಯುಲರ್/ ರಿಪೀಟರ್ಸ್ (NEP/SEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು ೨೦೨೪-೨೫ ನೇ ಸಾಲಿನ ಸ್ನಾತಕ (UG)(SEP/NEP) ದ್ವಿತೀಯ ಮತ್ತು ನಾಲ್ಕನೇಯ ಸೆಮಿಸ್ಟರ್ ನ ಬಿಎ/ಬಿಎಸ್ಸಿ / ಬಿಕಾಂ/ಬಿಸಿಎ /ಬಿಬಿಎ /ಬಿಎಸ್ ಡೆಬ್ಲ್ಯೂ ಕೋರ್ಸ್ ಗಳ ಮರುಮೌಲ್ಯಮಾಪನ ಅಧಿಸೂಚನೆ 2025-26 ನೇ ಸಾಲಿನ ಸ್ನಾತಕ(UG) ಪ್ರಥಮ, ತೃತೀಯ ಹಾಗೂ ಐದನೇಯ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳ ಸಂಭಾವನೆಯನ್ನು ಪಾವತಿಸಲು ಅವರ ಬ್ಯಾಂಕ್ ಖಾತೆಯ ವಿವರವನ್ನು ಒದಗಿಸುವ ಕುರಿತು. 2025-26ನೇ ಸಾಲಿನ ಸ್ನಾತಕೋತ್ತರ(PG) ದ್ವಿತೀಯ ಸೆಮಿಸ್ಟರ್ ನ OPEN ELECTIVE(OE) ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು. 2025-26ನೇ ಸಾಲಿನ ಬಿ.ಇಡಿ. ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸರ್ಕಾರಿ ಕೋಟಾದಡಿ ದಾಖಲಾಗದೆ ಉಳಿಕೆಯಾಗಿರುವ ಸೀಟುಗಳ ಮಾಹಿತಿ ಕುರಿತು. ೨೦೨೪-೨೫ ನೇ ಸಾಲಿನ ಸ್ನಾತಕೋತ್ತರ(PG) ನಾಲ್ಕನೇ ಸೆಮಿಸ್ಟರ್ ನ(CBCS/NEWCBCS) ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಕುರಿತು. Registration of II Semester Open Elective Subject 2026

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ : 7 ದಿನಗಳ ರಾಷ್ಟೀಯ ಸೇವಾ ಯೋಜನೆ ರಾಷ್ಟೀಯ ಭಾವೈಕ್ಯತಾ ಶಿಬಿರ – 2026

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತರಾಗಿ ಜೀವನ ನಡೆಸಲು ಹಾಗೂ ಆರೋಗ್ಯಕರ ಸಮಾಜ ಕಟ್ಟಲು ರಾಷ್ಟೀಯ ಸೇವಾ ಯೋಜನೆ ಪೂರಕ ವೇದಿಕೆ ಎಂದು ಆದಿಕವಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.
ರಾಷ್ಟೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ಪ್ರಾದೇಶಿಕ ನಿರ್ದೇಶನಾಲಯ, ಏನ್.ಎಸ.ಎಸ. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಸಹಯೋಗದೊಂದಿಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ರಾಷ್ಟೀಯ ಸೇವಾ ಯೋಜನೆ ಅಡಿಯಲ್ಲಿ ವಿವಿಯ ಸಭಾಂಗಣದಲ್ಲಿ ದಿನಾಂಕ. 24 ರಂದು ನಡೆದ 7 ದಿನಗಳ ರಾಷ್ಟೀಯ ಭಾವೈಕ್ಯತಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವರಾದ ಡಾ. ಎ.ಚನ್ನಪ್ಪ ಅವರು ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ನಡೆಯುವ ರಾಷ್ಟೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ರಾಷ್ಟ್ರಿಯ ಸೇವಾ ಯೋಜನೆಯ ಉದ್ದೇಶಗಳನ್ನು ಜೀವನದ ಉದ್ದಕ್ಕೂ ಪಾಲಿಸಬೇಕು. ಶಿಬಿರದಲ್ಲಿ ಕಲಿತುಕೊಂಡ ವಿಚಾರಗಳನ್ನು, ಸಂಸ್ಕಾರ ಹೆಚ್ಚಿಸುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಏಳು ದಿನಗಳ ಈ ಶಿಬಿರ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಆತ್ಮ ಸ್ಥೈರ್ಯ ಹಾಗೂ ಉತ್ತಮ ಪ್ರಜೆಗಳಾಗಿ ಬದುಕಲು ಕಲಿಸಿಕೊಡುತ್ತದೆ ಎಂದರು. ಈ ಸಂದರ್ಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರು ಡಾ.ಸುಯಮಿಂದ್ರ ಕುಲಕರ್ಣಿ, ಉಪಕುಲಪತಿಗಳು ಡಾ.ಕೆ.ವೆಂಕಟೇಶ್, ಡೀನರಾದ ಪ್ರೊ. ಪಾರ್ವತಿ ಸಿ.ಎಸ., ಡಾ.ಲತಾ.ಎಂ.ಎಸ., ಏನ್.ಎಸ.ಎಸ ಸಂಯೋಜನಾ ಅಧಿಕಾರಿ ಡಾ.ಜಿ.ಎಸ.ಬಿರಾದಾರ ಮತ್ತು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದ್ಯಸರಾದ ಡಾ.ಮೀನಾಕ್ಷಿ ಖಂಡಿಮಠ, ಡಿ.ಆರ್.ಚಿನ್ನ, ಜೀಶಾನ್ ಅಖಿಲ ಸಿದ್ದಿಖಿ, ಶಿವಣ್ಣ, ಶ್ರೇಯಾಂಕ್ ಎಚ್.ವಿ ರವರು ಪಾಲ್ಗೊಂಡಿದ್ದರು.

೨೦೨೫-೨೬ ನೇ ಸಾಲಿನ ಸ್ನಾತಕ (UG) ದ್ವಿತೀಯ, ನಾಲ್ಕನೇಯ ಮತ್ತು ಆರನೇಯ ಸೆಮಿಸ್ಟರ್ ನ ರೆಗ್ಯುಲರ್/ ರಿಪೀಟರ್ಸ್ (NEP/SEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು