NEW

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಸಂಯೋಜಿತ ಖಾಸಗಿ ಕಾಲೇಜುಗಳಲ್ಲಿನ ನಾಥಕೋತರ(PG) ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡುವ ಕುರಿತು. ೨೦೨೫-೨೬ನೇ ಶೈಕ್ಷಣಿಕ ಸಾಲಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಂಯೋಜಿತ ಸರಕಾರಿ ಮಹಾವಿದ್ಯಾಲಯಗಳಲ್ಲಿನ ಸ್ನಾತಕೋತ್ತರ(PG) ಪದವಿ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿ ವಿವರವನ್ನು ಹಾಗೂ ಶುಲ್ಕ ಸಲ್ಲಿಸಿರುವ ಮಾಹಿತಿ ಕುರಿತು. ೨೦೨೦-೨೬ನೇ ಶೈಕ್ಷಣಿಕ ಸಾಲಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಮುಖ್ಯ ಆವರಣದ ಸ್ನಾತಕೋತರ(PG) ಪದವಿ ಪ್ರಥಮ ಸೆಮಿಸ್ಟರಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿ ವಿವರವನ್ನು ಹಾಗೂ ಶುಲ್ಕ ಸಲ್ಲಿಸಿರುವ ಮಾಹಿತಿ ಕುರಿತು. Notification-01 Notification-02 Download Assistant Professor Score ೨೦೨೫-೨೬ನೇ ಸಾಲಿನ ಸ್ನಾತಕ(UG) ಪ್ರಥಮ, ತೃತೀಯ ಹಾಗೂ ಐದನೇಯ ಸೆಮಿಸ್ಟರ್ ನ ರೆಗ್ಯುಲರ್/ರಿಪೀಟರ್ಸ್(NEP/SEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು.

Press releases

View by type

View by releasing authority

68ನೇ ಕನ್ನಡ ರಾಜ್ಯೋತ್ಸವ ಆಚರಣೆ

ರಾಯಚೂರು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾನ್ಯ ಕುಲಪತಿಗಳು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣವನ್ನು ನೆರವೇರಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ಉಪಕುಲಸಚಿವರು, ಡೀನರು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ನಾತಕೋತ್ತರ ಕೋರ್ಸಗಳ ಫಲಿತಾಂಶ ಪ್ರಕಟ

೨೦೨೨-೨೩ ನೇ ಸಾಲಿನ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ನ ಎಂ.ಎ (ಕನ್ನಡ) ಹಾಗು ಎಮ್. ಎಸ್ಸಿ ( ವಿದ್ಯುದ್ಮಾನ ಮತ್ತು ಉಪಕರಣಾತ್ಮಕ ತಂತ್ರಜ್ಞಾನ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ವಿಷಯಗಳ ಫಲಿತಾಂಶಗಳನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯ ಮಾಪನ) ಇವರು ಪ್ರಕಟಿಸಿದರು

ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ ಆರಂಭ

೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ UUCMS ಮೂಲಕ ಆರಂಭಗೊಂಡಿದ್ದು ಈ ಬಾರಿ ಪ್ರವೇಶ ಪರೀಕ್ಷಾ ಮೂಲಕ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿಯನ್ನು ನೀಡುವುದಾಗಿ ಪ್ರೊ. ವಿಶ್ವನಾಥ್ ಎಂ. ಕುಲಸಚಿವರು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ತಿಳಿಸಿದ್ದಾರೆ.

ಕಬಡ್ಡಿ ಮತ್ತು ವಾಲಿಬಾಲ್ ತಂಡದ ಆಯ್ಕೆಯ ಪ್ರಕ್ರಿಯೆಗೆ ಚಾಲನೆ

ರಾಯಚೂರು ವಿಶ್ವವಿದ್ಯಾಲಯ ಕಬಡ್ಡಿ ಮತ್ತು ವಾಲಿಬಾಲ್ ತಂಡದ ಆಯ್ಕೆಯ ಪ್ರಕ್ರಿಯೆಗೆ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ), ಇವರು ಚಾಲನೆ ನೀಡಿದರು.

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಮಹರ್ಷಿ ಮಾಲ್ಮೀಕಿ ಜಯಂತಿ ಆಚರಣೆಯಾ ಕಾರ್ಯಕ್ರಮದಲ್ಲಿ ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು ಮೌಲ್ಯಮಾಪನ, ಪ್ರೊ. ಪಿ. ಭಾಸ್ಕರ್, ನೋಡಲ್ ಅಧಿಕಾರಿಗಳು, ಡಾ. ಜಿ.ಎಸ್ ಬಿರಾದಾರ್, ಉಪ ಕುಲಸಚಿವರು, ಹಾಗು ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಎನ್.ಎಸ್.ಎಸ್ ಯುವಜನೋತ್ಸವ-2023

ರಾಷ್ಟ್ರೀಯ ಸೇವಾ ಯೋಜನೆ ಕೋಶ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರಕಾರ ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು ಮತ್ತು ರಾಯಚೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರಾಜ್ಯಮಟ್ಟದ ಎನ್.ಎಸ್.ಎಸ್ ಯೋಜನೋತ್ಸವ-2023 ಕಾರ್ಯಕ್ರಮವನ್ನು ದಿನಾಂಕ 03.10.2023 ರಿಂದ 07.10.2023 ರವರೆಗೆ ಪ್ರೇಕ್ಷಾಗೃಹ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರುನಲ್ಲಿ ಆಯೋಜಿಸಲಾಗಿದೆ.

ರಾಯಚೂರು ವಿಶ್ವವಿದ್ಯಾಲಯಕ್ಕೆ ಡಾ.ಗುರುರಾಜ್ ಕರ್ಜಗಿ ಅವರ ಭೇಟಿ

ರಾಯಚೂರು ವಿಶ್ವವಿದ್ಯಾಲಯಕ್ಕೆ ಶಿಕ್ಷಣ ತಜ್ಞರು ಹಾಗೂ ಕ್ರಿಯೇಟಿವ್ ಅಕಾಡೆಮಿ ಆಫ್ ಎಜುಕೇಶನ್ ನಿರ್ದೇಶಕರು ಆದ ಡಾ.ಗುರುರಾಜ್ ಕರ್ಜಗಿ ಇವರು ದಿನಾಂಕ 10.10.2023 ಬೆಳಗ್ಗೆ 9.30 ಗಂಟೆಗೆ ಭೇಟಿ ನೀಡಿದ್ದರು.

“ಭಾರತದಲ್ಲಿ ಭಕ್ತಿ ಸಂಪ್ರದಾಯ”

ರಾಯಚೂರು ವಿಶ್ವವಿದ್ಯಾಲಯದಲ್ಲಿ “ಭಾರತದಲ್ಲಿ ಭಕ್ತಿ ಸಂಪ್ರದಾಯ” ಎಂಬ ಎರಡು ದಿನಗಳ ಕಾರ್ಯಗಾರವನ್ನು ಮಾನ್ಯ ಕುಲಪತಿಗಳು ಪ್ರೊ. ಹರೀಶ್ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.09.2023 ರಿಂದ 27.09.2023 ರ ವರೆಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.